ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಮಂಗಳವಾರ, ಮಾರ್ಚ್ 16, 2010

ಹೊಸತನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ರೈತ




ಇತ್ತೀಚೆಗಂತೂ ಯಾವ ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸಿದರೂ ಒಂದು ಸುದ್ದಿ ಮಾತ್ರ ಇದ್ದೇ ಇರುತ್ತೆ. “ರಸ್ತೆಗೆ ಟೊಮ್ಯಾಟೋ ಸುರಿದು ರೈತರ ಪ್ರತಿಭಟನೆ” ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಸುದ್ದಿಯ ಜೊತೆಗೊಂದು ಫೋಟೋ… ಚಂದದ ಟೊಮ್ಯಾಟೋಗಳನ್ನೆಲ್ಲ ಹಾಗೆ ಸುರಿದದ್ದನ್ನು ಕಂಡು ಎಷ್ಟೋ ಜನ “ಛೆ! ದಂಡ ಮಾಡ್ತಿದ್ದಾರಲ್ಲಾ..” ಎಂದು ಗೊಣಗಿದ್ದುಂಟು.

ಯಾಕೆ ಹೀಗಾಯ್ತು…? ರೈತರು ಬೆಳದಿದ್ದನ್ನು ಕೊಳ್ಳುವ ದಲ್ಲಾಳಿಗಳು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದಾರೆ.ಕನಿಷ್ಠ ಬೆಲೆಯೂ ಸಿಗದೇ ಕೃಷಿಕ ಕಂಗಾಲಾಗಿದ್ದಾನೆ.
ಜಾಗತೀಕರಣ, ಆಧುನಿಕೀಕರಣದ ಈ ಹೊತ್ತಿನಲ್ಲಿ ಸಾಂಪ್ರದಾಯಿಕ ಕೃಷಿಗೆ ಹಿನ್ನಡೆ ಉಂಟಾಗಿದೆ. ಹೀಗಾಗಿ ಬದಲಾದ ಪರಿಸ್ತಿತಿಯಲ್ಲಿ ರೈತರು ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ. ಉದಾಹರಣೆಗೆ ಹೀಗೆ ವ್ಯರ್ಥವಾಗಿ ಟೊಮ್ಯಾಟೋಗಳನ್ನೂ ರಸ್ತೆಗೆ ಸುರಿಯುವ ಬದಲು ರೈತರು ತಮ್ಮ ಮನೆಯಲ್ಲೇ ಅದನ್ನು ಸಂಸ್ಕರಿಸಿ ಜಾಮ್, ಜೆಲ್ಲಿ ಮೊದಲಾದ ಮೌಲ್ಯವರ್ಧಿತ ಪದಾರ್ಥಗಳನ್ನಾಗಿ ಪರಿವರ್ತಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು.ಈ ಮೂಲಕಹೆಚ್ಚಿನ ಲಾಭ ಗಳಿಸಬಹುದು.ಸಮಾನ ಮನಸ್ಕರು ಒಂದೆಡೆ ಸೇರಿ ಇಂತಹ ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಬ್ಯಾಂಕುಗಳಿ0ದಲೂ ಹಣಕಾಸು ವ್ಯವಸ್ಥೆಯಿದೆ. (ಸರ್ಕಾರದಿಂದಲೂ ಹತ್ತು ಹಲವು ಉಪಯುಕ್ತ ಸೌಲಭ್ಯಗಳು ಲಭ್ಯವಿದ್ದರೂ ಅದು ಬಹುತೇಕ ಯೋಗ್ಯರನ್ನು ತಲುಪುತ್ತಿಲ್ಲವಷ್ಟೇ …!)

ಅವರವರದ್ದೇ ಹೊಲದ ಉತ್ಪನ್ನಗಳನ್ನು ಅವರೇ ಸಂಸ್ಕರಿಸಿ ನೇರ ಮಾರಾಟ ಮಾಡುವ ಮೂಲಕ ಯಶಸ್ವಿಯಾಗಬಹುದು. ಸೂಕ್ತ ಬೆಲೆ ಸಿಗದಿದ್ದಾಗ ಆತ್ಮಹತ್ಯೆಯಂತಹ ಆಲೋಚನೆ ಬಿಟ್ಟು, ನಿರಾಶರಾಗದೆ ಇಂತಹ ಪ್ರಯತ್ನಗಳಿಗೆ ಮುಂದಗಬಾರದೇಕೆ…??

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ