ಹಾಸನದಲ್ಲಿ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಯುವಜನೋತ್ಸವದಲ್ಲಿ ನನ್ನ ವ್ಯಂಗ್ಯಚಿತ್ರಕ್ಕೆ ಪ್ರಥಮ ಬಹುಮಾನ...
ಶುಕ್ರವಾರ, ಡಿಸೆಂಬರ್ 18, 2009
ನನ್ ಕಾರ್ಟೂನ್ಗೆ ಫಸ್ಟ್ ಪ್ರೈಜ್ ...!
ಹಾಸನದಲ್ಲಿ ನಡೆದ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಯುವಜನೋತ್ಸವದಲ್ಲಿ ನನ್ನ ವ್ಯಂಗ್ಯಚಿತ್ರಕ್ಕೆ ಪ್ರಥಮ ಬಹುಮಾನ...
ಶನಿವಾರ, ಆಗಸ್ಟ್ 15, 2009
ಎರೆಡು ಕವಿತೆಗಳು
ಸಾರ್ಥಕ
ಸ್ವಾತಂತ್ಯ ಸಂಭ್ರಮದ
ದಿನದಂದು ಮಂತ್ರಿ ಮಹೋದಯರು
ದೇಶವನ್ನುದ್ದೇಶಿಸಿ ನಗೆಚೆಲ್ಲಿ ಮಾತನಾಡಿದ್ದು
ಗುಂಡು ನಿರೋಧಕ
ಗಾಜಿನೊಳಗಿಂದ;
ಹತ್ತು ಸೈನಿಕರ ಸುತ್ತ ಪಹರೆಯಲ್ಲಿ...!
ಅರಿವು
ಪಂಜರದಲ್ಲಿದ್ದಗಲೇ
ತಿಳಿಯುವುದು
ಸ್ವಾತಂತ್ರ್ಯದ
ನಿಜವಾದ
ಬೆಲೆ...
ಸ್ವಾತಂತ್ಯ ಸಂಭ್ರಮದ
ದಿನದಂದು ಮಂತ್ರಿ ಮಹೋದಯರು
ದೇಶವನ್ನುದ್ದೇಶಿಸಿ ನಗೆಚೆಲ್ಲಿ ಮಾತನಾಡಿದ್ದು
ಗುಂಡು ನಿರೋಧಕ
ಗಾಜಿನೊಳಗಿಂದ;
ಹತ್ತು ಸೈನಿಕರ ಸುತ್ತ ಪಹರೆಯಲ್ಲಿ...!
ಅರಿವು
ಪಂಜರದಲ್ಲಿದ್ದಗಲೇ
ತಿಳಿಯುವುದು
ಸ್ವಾತಂತ್ರ್ಯದ
ನಿಜವಾದ
ಬೆಲೆ...
ಗುರುವಾರ, ಏಪ್ರಿಲ್ 30, 2009
ಇದು ಗೃಹಿಣಿ ಗೀತೆ ...!
ಇತ್ತೀಚೆಗೆ ಗೆಳೆಯ ಮಧುಸೂಧನ ಅವರಮ್ಮ ಬರೆದ ಕವನಗಳಿರುವ ಒಂದು ಪುಸ್ತಕವನ್ನು ತಂದು ನನ್ನ ಕೈಗಿತ್ತು ಓದಿ ನೋಡು ಅಂದ. ನೀನು ಹ್ಯಾಗೂ ಪತ್ರಿಕೆಗಳಿಗೆ ಬರೀತೀಯಲ್ಲಾ ಇವನ್ನೂ ಯಾವುದಾದರೂ ಪತ್ರಿಕೆಗೆ ಕಳುಹಿಸು ಎಂದ. ಪುಸ್ತಕ ತೆರೆದು ನೋಡಿ ನಿಜಕ್ಕೂ ಒಂದು ಕ್ಷಣ ದಂಗಾದೆ! ಕೇವಲ ನಾಲ್ಕನೇ ಕ್ಲಾಸ್ ತನಕ ಓದಿರುವ ಓರ್ವ ಸಾಮಾನ್ಯ ಗೃಹಿಣಿ ಬರೆದ ಅಚ್ಚುಕಟ್ಟಾದ ಕವನಗಳು...ಬರೆದ ನೂರಾರು ಕವನಗಳಲ್ಲೂ ಬೇರೆ ಬೇರೆ ವಿಚಾರ ವಿಭಿನ್ನ ಭಾವ..ನಾಡು,ನುಡಿ,ಮನಸು,ನಿಸರ್ಗ,ಸಂಸಾರ,ಮಗುವಿನ ಚಿನ್ನಾಟ,ಕುಡುಕ ಪತಿ, ದುರಾಸೆ, ತವರಿನ ಪ್ರೀತಿ, ಮಾಂಗಲ್ಯ ಪ್ರೇಮ...ಅಬ್ಬಬ್ಬಾ ಅವರು ಬರೆಯದ ವಿಷಯಗಳಿಲ್ಲ.ದೈನಂದಿನ ಜೀವನ ದರ್ಶನದಿಂದ ಹುಟ್ಟಿದ ಕವಿತೆಗಳು...ಅವನ್ನು ಬರೆದ ಪಾರ್ವತಮ್ಮ ಅವರಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇ ಬೇಕು...
ಇಲ್ಲಿವೆ ಅದರ ಒಂದೆರೆಡು ಸ್ಯಾಂಪಲ್...
...............................
ಒನಕೆ ಓಬವ್ವ
ಅಂದು ಹಾಕಿದ್ದಳು ವೀರಗಚ್ಚೆಯ
ಒನಕೆ ಓಬವ್ವ
ನಾಡನ್ನು ರಕ್ಷಿಸಲು;
ಇಂದು ನಾವು ಹಾಕುವೆವು ಚೂಡೀದಾರ
ರಾವಣರಿಂದ ರಕ್ಷಿಸಿಕೊಳ್ಳಲು...
................................
ಮಾಂಗಲ್ಯದ ಮೂರು ಗಂಟು
ಒಂದನೇ ಗಂಟು ಅತ್ತೆಗೆ
ಮತ್ತೊಂದು ಗಂಟು ಮಾವಗೆ
ಮೂರನೆಯ ಗಂಟು ನಿನಗೆ ಶರಣಾದೆನಮ್ಮಾ ಎಂದು-
ಆದರೆ ಸಪ್ತಪದಿ ಎಂದರೇ ಅಗಲಿಕೆ
ಅಪ್ಪ,ಅಮ್ಮ,ಅಣ್ಣ,ತಮ್ಮ,ಬಂಧು-ಬಳಗ
ಎಲ್ಲ ಮರೆಯುವುದೇ ಸಪ್ತಪದಿ.
ಹಳೆ ಸಂಬಂಧ ಮರೆತು ಹೊಸ ಬಳಗಕ್ಕೆ ಹೋಗುವ
ನನಗೆ ಆರೈಸಲೆಂಡೇ ಬ್ರಹ್ಮ ಭೋಜನ..
ರಾತ್ರಿಯೆಲ್ಲಾ ನಿದ್ದೆಗೆಟ್ಟು ದುಡಿದರೂ
ಲಕ್ಷ್ಮಣರೇಖೆ,ಸಂಪ್ರದಾಯದ ಬಂಧನ
ಅದೇ ಸಪ್ತಪದಿ,ಮದುವೆಯೆಂಬ ಬಂಧನ....
-ಕವಯಿತ್ರಿ: ಪಾರ್ವತಮ್ಮ
ಇಲ್ಲಿವೆ ಅದರ ಒಂದೆರೆಡು ಸ್ಯಾಂಪಲ್...
...............................
ಒನಕೆ ಓಬವ್ವ
ಅಂದು ಹಾಕಿದ್ದಳು ವೀರಗಚ್ಚೆಯ
ಒನಕೆ ಓಬವ್ವ
ನಾಡನ್ನು ರಕ್ಷಿಸಲು;
ಇಂದು ನಾವು ಹಾಕುವೆವು ಚೂಡೀದಾರ
ರಾವಣರಿಂದ ರಕ್ಷಿಸಿಕೊಳ್ಳಲು...
................................
ಮಾಂಗಲ್ಯದ ಮೂರು ಗಂಟು
ಒಂದನೇ ಗಂಟು ಅತ್ತೆಗೆ
ಮತ್ತೊಂದು ಗಂಟು ಮಾವಗೆ
ಮೂರನೆಯ ಗಂಟು ನಿನಗೆ ಶರಣಾದೆನಮ್ಮಾ ಎಂದು-
ಆದರೆ ಸಪ್ತಪದಿ ಎಂದರೇ ಅಗಲಿಕೆ
ಅಪ್ಪ,ಅಮ್ಮ,ಅಣ್ಣ,ತಮ್ಮ,ಬಂಧು-ಬಳಗ
ಎಲ್ಲ ಮರೆಯುವುದೇ ಸಪ್ತಪದಿ.
ಹಳೆ ಸಂಬಂಧ ಮರೆತು ಹೊಸ ಬಳಗಕ್ಕೆ ಹೋಗುವ
ನನಗೆ ಆರೈಸಲೆಂಡೇ ಬ್ರಹ್ಮ ಭೋಜನ..
ರಾತ್ರಿಯೆಲ್ಲಾ ನಿದ್ದೆಗೆಟ್ಟು ದುಡಿದರೂ
ಲಕ್ಷ್ಮಣರೇಖೆ,ಸಂಪ್ರದಾಯದ ಬಂಧನ
ಅದೇ ಸಪ್ತಪದಿ,ಮದುವೆಯೆಂಬ ಬಂಧನ....
-ಕವಯಿತ್ರಿ: ಪಾರ್ವತಮ್ಮ
ಶುಕ್ರವಾರ, ಏಪ್ರಿಲ್ 10, 2009
ನಮ್ಮನೆಯ ಮುಂದೆ ತೇಜಸ್ವಿ...!


ಅವತ್ತು ಏಪ್ರಿಲ್ 5, 2007
ನಮಗಾಗ ಎರೆಡನೇ ಪಿ.ಯು.ಸಿ ಪರೀಕ್ಷೆಗಳು ನಡೆಯುತ್ತಿದ್ದವು. ಎರೆಡು ದಿನ ರಜೆ ಇದ್ದಿದ್ದರಿಂದ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆಯಿತ್ತಿದ್ದ 'ವಿಶ್ವ ಗೋ ಸಮ್ಮೇಳನಕ್ಕೆ ಮನೆಯವರೆಲ್ಲಾ ಹೊರಟೆವು.ಅಲ್ಲಿ ಮದ್ಯಾಹ್ನ ಊಟ ಮಾಡಿದ ನಂತರ ಅಲ್ಲೇ ಇದ್ೞ ಅಂಗಡಿ ಮಳಿಗೆಗಳತ್ತ ಹೊರಟೆವು. ನಾನು ಎಂದಿನಂತೆ ಹೋಗಿ ಒಂದು ಪುಸ್ತಕ ಮಳಿಗೆಯ ಮುಂದೆ ನಿಂತು ನೋಡುತ್ತಿದ್ದೆ.ಕನ್ನಡದ ಹಲವು ಹಿರಿಯರ ಚಂದ-ಚಂದದ ಪುಸ್ತಕಗಳು ಅಲ್ಲಿದ್ದವು.ಕುವೆಂಪು, ಕಾರಂತ,ತೇಜಸ್ವಿ,ಬೇಂದ್ರೆ, ಬೀಚಿ.....ಒಂದೇ ಎರೆಡೇ...?
ನನಗೆ ಕೊಳ್ಳುವ ಆಸೆಯಾಯಿತು. ತೇಜಸ್ವಿಯವರ ಒಂಡೆರೆಡು ಪುಸ್ತಕ ಕೊಳ್ಳೋಣಾ? ಅಂತ ಅಕ್ಕನ್ನ ಕೇಳಿದೆ... "ನಿನಗಂತೂ ಯಾವಾಗಲೂ ಪುಸ್ತಕದ ಹುಚ್ಚು ಅಂತ ಪ್ರೀತಿಯಂದ ಬೈಯುತ್ತಾ ಹೇಗೂ ಇವೆಲ್ಲಾ ನಮ್ಮ ಕೊಪ್ಪದಲ್ಲೇ ಸಿಗುತ್ತೆ ,ಈಗ ಬೇರೆ ಏನಾದರೂ ತಗೋ ಎಂದಳು. ಅರೆಮನಸ್ಸಿನಿಂದಲೇ ಒಪ್ಪಿಗೆ ಇತ್ತೆ.
ಮನೆಗೆ ವಾಪಸ್ ಬರುವಾಗ ಸುಮಾರು ಎಂಟು-ಎಂಟೂವರೆ ರಾತ್ರಿಯಾಗಿತ್ತು. ಸ್ವಲ್ಪ ಸುಧಾರಿಸಿಕೊಂಡಿ ಟಿ.ವಿ. ಹಾಕಿದಾಗ ನಿಜಕ್ಕೂ ಶಾಕ್...! ವಾರ್ತೆಯಲ್ಲಿ ತೇಜಸ್ವಿ ನಿಧನದಸುದ್ದಿ ಬರುತ್ತಿತ್ತು.ಒಂದು ಕ್ಷಣ ನಂಬಲಾಗಲಿಲ್ಲ...ಮದ್ಯಾಹ್ನವಷ್ಟೇ ಅವರ ಪುಸ್ತಕವನ್ನ ಕೊಳ್ಳಬೇಕೆಂದಿದ್ದೆ. ಸುಮಾರಿಗೆ ಅದೇ ಸಮಯದಲ್ಲಿ ಅವರು ನಮ್ಮನು ಅಗಲಿ 'ಮಾಯಾಲೋಕ"ಕ್ಕೆ ತೆರಳಿದ್ದರು...
ಅವತ್ತು ರಾತ್ರಿಯಲ್ಲಾ ಯಾಕೋ ಒಂಥರಾ ಅನುಭವ ಸರಿಯಾಗಿ ನಿದ್ದೆ ಬರಲಿಲ್ಲ...ಏನನ್ನೋ ಕಳೆದುಕೊಂಡ ಅನುಭವ...
ಆಗ ನಾನಿನ್ನೂ ಸಾಹಿತ್ಯ ಸಮುದ್ರಕ್ಕೆ ಸಂಪೂರ್ಣವಾಗಿ ಧುಮುಕಿರಲಿಲ್ಲ. ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಒಂದಿಷ್ಟು ಕವನ,ಲೇಖನಗಳು ಪ್ರಕಟವಾಗಿದ್ದವಷ್ಟೇ.ನಿಜ ಹೇಳಬೇಕೆಂದರೆ ನಾನಾಗ ತೇಜಸ್ವಿಯವರ ಒಂದು ಕೃತಿಯನ್ನೂ ಪೂರ್ಣವಾಗಿ ಓದಿರಲಿಲ್ಲ..ಕೊಪ್ಪದ ನಮ್ಮನೆಯಿಂದ ಕೆಲವೇ ಕಿ.ಮೀ.ದೂರದಲ್ಲಿ ಅವರ ಮನೆ ಇದ್ದರೂ ನಾನವರನ್ನ ನೇರವಾಗಿ ನೋಡಿರಲಿಲ್ಲ.ಆದರೂ ಕೂಡಾ ತೇಜಸ್ವಿ ಅವರೆಂದರೆ ಒಂಥರಾ ಆಪ್ತ ಭಾವ.
ನಮಗಾಗ ಎರೆಡನೇ ಪಿ.ಯು.ಸಿ ಪರೀಕ್ಷೆಗಳು ನಡೆಯುತ್ತಿದ್ದವು. ಎರೆಡು ದಿನ ರಜೆ ಇದ್ದಿದ್ದರಿಂದ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆಯಿತ್ತಿದ್ದ 'ವಿಶ್ವ ಗೋ ಸಮ್ಮೇಳನಕ್ಕೆ ಮನೆಯವರೆಲ್ಲಾ ಹೊರಟೆವು.ಅಲ್ಲಿ ಮದ್ಯಾಹ್ನ ಊಟ ಮಾಡಿದ ನಂತರ ಅಲ್ಲೇ ಇದ್ೞ ಅಂಗಡಿ ಮಳಿಗೆಗಳತ್ತ ಹೊರಟೆವು. ನಾನು ಎಂದಿನಂತೆ ಹೋಗಿ ಒಂದು ಪುಸ್ತಕ ಮಳಿಗೆಯ ಮುಂದೆ ನಿಂತು ನೋಡುತ್ತಿದ್ದೆ.ಕನ್ನಡದ ಹಲವು ಹಿರಿಯರ ಚಂದ-ಚಂದದ ಪುಸ್ತಕಗಳು ಅಲ್ಲಿದ್ದವು.ಕುವೆಂಪು, ಕಾರಂತ,ತೇಜಸ್ವಿ,ಬೇಂದ್ರೆ, ಬೀಚಿ.....ಒಂದೇ ಎರೆಡೇ...?
ನನಗೆ ಕೊಳ್ಳುವ ಆಸೆಯಾಯಿತು. ತೇಜಸ್ವಿಯವರ ಒಂಡೆರೆಡು ಪುಸ್ತಕ ಕೊಳ್ಳೋಣಾ? ಅಂತ ಅಕ್ಕನ್ನ ಕೇಳಿದೆ... "ನಿನಗಂತೂ ಯಾವಾಗಲೂ ಪುಸ್ತಕದ ಹುಚ್ಚು ಅಂತ ಪ್ರೀತಿಯಂದ ಬೈಯುತ್ತಾ ಹೇಗೂ ಇವೆಲ್ಲಾ ನಮ್ಮ ಕೊಪ್ಪದಲ್ಲೇ ಸಿಗುತ್ತೆ ,ಈಗ ಬೇರೆ ಏನಾದರೂ ತಗೋ ಎಂದಳು. ಅರೆಮನಸ್ಸಿನಿಂದಲೇ ಒಪ್ಪಿಗೆ ಇತ್ತೆ.
ಮನೆಗೆ ವಾಪಸ್ ಬರುವಾಗ ಸುಮಾರು ಎಂಟು-ಎಂಟೂವರೆ ರಾತ್ರಿಯಾಗಿತ್ತು. ಸ್ವಲ್ಪ ಸುಧಾರಿಸಿಕೊಂಡಿ ಟಿ.ವಿ. ಹಾಕಿದಾಗ ನಿಜಕ್ಕೂ ಶಾಕ್...! ವಾರ್ತೆಯಲ್ಲಿ ತೇಜಸ್ವಿ ನಿಧನದಸುದ್ದಿ ಬರುತ್ತಿತ್ತು.ಒಂದು ಕ್ಷಣ ನಂಬಲಾಗಲಿಲ್ಲ...ಮದ್ಯಾಹ್ನವಷ್ಟೇ ಅವರ ಪುಸ್ತಕವನ್ನ ಕೊಳ್ಳಬೇಕೆಂದಿದ್ದೆ. ಸುಮಾರಿಗೆ ಅದೇ ಸಮಯದಲ್ಲಿ ಅವರು ನಮ್ಮನು ಅಗಲಿ 'ಮಾಯಾಲೋಕ"ಕ್ಕೆ ತೆರಳಿದ್ದರು...
ಅವತ್ತು ರಾತ್ರಿಯಲ್ಲಾ ಯಾಕೋ ಒಂಥರಾ ಅನುಭವ ಸರಿಯಾಗಿ ನಿದ್ದೆ ಬರಲಿಲ್ಲ...ಏನನ್ನೋ ಕಳೆದುಕೊಂಡ ಅನುಭವ...
ಆಗ ನಾನಿನ್ನೂ ಸಾಹಿತ್ಯ ಸಮುದ್ರಕ್ಕೆ ಸಂಪೂರ್ಣವಾಗಿ ಧುಮುಕಿರಲಿಲ್ಲ. ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಒಂದಿಷ್ಟು ಕವನ,ಲೇಖನಗಳು ಪ್ರಕಟವಾಗಿದ್ದವಷ್ಟೇ.ನಿಜ ಹೇಳಬೇಕೆಂದರೆ ನಾನಾಗ ತೇಜಸ್ವಿಯವರ ಒಂದು ಕೃತಿಯನ್ನೂ ಪೂರ್ಣವಾಗಿ ಓದಿರಲಿಲ್ಲ..ಕೊಪ್ಪದ ನಮ್ಮನೆಯಿಂದ ಕೆಲವೇ ಕಿ.ಮೀ.ದೂರದಲ್ಲಿ ಅವರ ಮನೆ ಇದ್ದರೂ ನಾನವರನ್ನ ನೇರವಾಗಿ ನೋಡಿರಲಿಲ್ಲ.ಆದರೂ ಕೂಡಾ ತೇಜಸ್ವಿ ಅವರೆಂದರೆ ಒಂಥರಾ ಆಪ್ತ ಭಾವ.
ನಮ್ಮ ಮನೆಯಿದ್ದುದು ಕೊಪ್ಪದ ಮುಖ್ಯ ರಸ್ತೆಯಲ್ಲಿ. ತೀರ್ಥಹಳ್ಳಿಗೆ ಹೊಗಬೇಕೆಂದರೆ ಮನೆಯ ಮುಂದೆಯೇ ಹಾದು ಹೋಗಬೇಕಿತ್ತು.ಅಲ್ಲದೆಯೇ ಮೂಡಿಗೆರೆಯಿಂದ ಬಂದ ರಸ್ತೆಯೂ ಮುಖ್ಯ ರಸ್ತೆಯನ್ನು ಅಲ್ಲೇ ಸೇರಿ ಕೂಡು ದಾರಿಯಾಗಿತ್ತು.ಹಾಗಾಗಿ ತೇಜಸ್ವಿಯವರ ನಿಶ್ಚಲ ದೇಹ ನಮ್ಮನೆಯ ಮುಂದೆಯೇ ಹಾದು ಹೋಗಲಿತ್ತು.
ಬೆಳಿಗ್ಗೆಯಿಂದಲೇ ಮನೆ ಮೂಂದಿನ ರಸ್ತೆಯಲ್ಲಿ ಜನ ಜಮಾಯಿಸತೊಡಗಿದ್ದರು. ಪತ್ರಕರ್ತೆ ಗೌರಿ ಲಂಕೇಶ್,ಸ್ಥಳಿಯ ಜನಪ್ರತಿನಿಧಿಗಳು ಅಲ್ಲಿ ಹಾಜರಿದ್ದರು. ನೆರೆದವರೆಲ್ಲರ ಮುಖದ ಮೇಲೊಮ್ಮೆ ಕಣ್ಣು ಹಾಯಿಸಿದೆ, ದುಗುಡ ತುಂಬಿಕೊಂಡಿತ್ತು. ಅಷ್ಟೊಂದು ಜನರಿದ್ದರೂ ನೀರವ ಮೌನ ನೆಲೆಸಿತ್ತು.
ಸೂರ್ಯ ನೆತ್ತಿಗೇರಿ ಸುಮಾರು ಹೊತ್ತಾದ ಮೇಲೆ ಮೂಡಿಗೆರೆ ರಸ್ತೆಯ ಕಡೆಯಿಂದ ತೇಜಸ್ವಿಯವರನ್ನು ಹೊತ್ತ ಪುಟ್ಟ ಅಂಬುಲೆನ್ಸ್ ಬಂದು ಸರಿಯಾಗಿ ನಮ್ಮ ಮನೆಯ ಮುಂದೆಯೇ ನಿಂತಿತು. ಯಾರನ್ನು ನೋಡಬೇಕೆಂದು ನಾನು ಹಲವು ದಿನಗಳಿಂದ ಹಂಬಲಿಸುತ್ತಿದ್ದೆನೋ ಅವರು ನಮ್ಮನೆಯ ಮುಂದೆಯೇ ಮಲಗಿದ್ದರು...ಶವವಾಗಿ!
ಸುಮ್ಮನೇ ನಿಂತಿದ್ದ ಜನ ಒಮ್ಮೆಲೆ ವ್ಯಾನಿನ ಮೇಲೆ ಮುಗಿಬಿದ್ದು ಹಾರ ತುರಾಯಿ ಅರ್ಪಿಸತೊಡಗಿದರು. ಸದಾ ಸನ್ಮಾನಗಳಿಂದ ದೂರವಿರುತ್ತಿದ್ದ ತೇಜಸ್ವಿಯವರಿಗೆ ಸತ್ತಮೇಲೆ ಮಾಲಾರ್ಪಣೆ! ಜನ ಜಂಗುಳಿಯಲ್ಲಿ ನನಗೆ ಹತ್ತಿರ ಹೋಗಲಾಗಲಿಲ್ಲ. ಹೇಗೋ ಕಷ್ಟಪಟ್ಟು ಕಿಟಕಿಯಿಂದ ಬಗ್ಗಿ ನೋಡಿದೆ.ಗಾಜಿನ ಪೆಟ್ಟಿಗೆಯಲ್ಲಿ ತೇಜಸ್ವಿ ತಣ್ಣಗೆ ಮಲಗಿದ್ದರು. ಕುರುಚಲು ಗಡ್ಡ, ಸಾದಾ ಅಂಗಿ,ಜೀನ್ಸ್ ಪ್ಯಾಂಟಿನ ತೇಜಸ್ವಿ ಇವರೇನಾ ಎಂದೆನ್ನಿಸಿತು.ಕಾಡಲ್ಲಿ ಮನಸೋ ಇಚ್ಛೆ ಅಲೆದಾಡಿ, ಮೀನಿಗೆ ಗಾಳ ಹಾಕಿ , ಫೋಟೊತೆಗೆದ, ಕಾಡಿನ ಹಾಗೂ ಹಳ್ಳಿಯ ಅನುಭವಗಳನ್ನು ರಸವತ್ತಾಗಿ ಬರೆದ, ಮಿಲೆನಿಯಂ ಸಿರೀಸ್ ಅಂತಹ ಪುಸ್ತಕಗಳನ್ನು ಬರೆದು 'ಖ ಡ ಖ್' ಆಗಿ ಬದುಕಿದ ತೇಜಸ್ವಿ ಇವರೇನಾ ಎಂದೆನಿಸಿತು. ಪಕ್ಕದಲ್ಲೇ ಕುಳಿತ್ತಿದ್ದ ಪತ್ನಿ ರಾಜೇಶ್ವರಿಯವರ ಮುಖದಲ್ಲಿ ಅತ್ತು-ಅತ್ತು ಕಣ್ಣೀರು ಬತ್ತಿ ಹೋಗಿತ್ತು... ಸ್ವಲ್ಪ ಹೊತ್ತಾದ ಮೇಲೆ ವ್ಯಾನು ಕುಪ್ಪಳ್ಳಿಯತ್ತ ಹೊರಟಿತು. ಅದನ್ನೇ ದಿಟ್ಟಿಸುತ್ತಾನಿಂತಿದ್ದೆ. ಪಕ್ಕದಲ್ಲೇ ಇದ್ದ ಗೆಳೆಯ ಕಿರಣ ಬಂದು ಮನೆಗೆ ಹೋಗೋಣ ಎಂದಾಗಲೇ ಈ ಲೋಕಕ್ಕೆ ಬಂದಿದ್ದು.ಭಾರವಾದ ಹೃದಯದಿಂದ ನೆರೆದವರೆಲ್ಲಾ ಚದುರತೊಡಗಿದರು.ವಾಪಸ್ ಮನೆಯ ಮೆಟ್ಟಿಲು ಹತ್ತುವಾಗ ಕಣ್ಣಿಂದ ಕಾರಣವಿಲ್ಲದೆಯೇ ನೀರು ಜಾರಿ ನೆಲಕ್ಕೆ ಬಿತ್ತು...
ಹೇಳಿ ತೇಜಸ್ವಿ ... ಮಾಯಾಲೋಕ-2 ಬರೆಯದೇ ಇಷ್ಟು ಬೇಗ ಆ 'ಮಾಯಾಲೋಕಕ್ಕೆ' ಹೊರಟು ಹೋಗುವ ಅಗತ್ಯ ಇತ್ತೇ...?
[ಮೇಲಿನ ತೇಜಸ್ವಿ ವರ್ಣ ಚಿತ್ರ ಬರೆದಿದ್ದು ಕಲಾವಿದ ಗೆಳೆಯ ಪ್ರಭು ಕೆ.ಎನ್.]
[ಮೇಲಿನ ತೇಜಸ್ವಿ ವರ್ಣ ಚಿತ್ರ ಬರೆದಿದ್ದು ಕಲಾವಿದ ಗೆಳೆಯ ಪ್ರಭು ಕೆ.ಎನ್.]
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)