ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಶುಕ್ರವಾರ, ಜುಲೈ 2, 2010

ಮಧುರ ಮಧುರವೀ ಮಳೆಗಾಲ…(ಒಂದಿಷ್ಟು ಮಳೆಗವಿತೆಗಳು)




ನಾಸಿಕ ಧಾರೆ
ಮನದೊಳಗೆ ತುಂಬಿದ್ದ
ಕೊಳೆಯೆಲ್ಲ
ತೊಳೆತೊಳೆದು
ಕೆಳಗಿಳಿಯುತಿದೆ
ಮಳೆಗಾಲದಿ
ಮೂಗಿನಿಂದ…!
~~~~~~~~~~~~~~

ಕಾರಣ
ಸೂರ್ಯ ನನ್ನನ್ನು
ಸುಡುತ್ತಾನೆ೦ದು
ಕಾರ್ಮೋಡ ಅತ್ತು-ಅತ್ತು
ಮಂಜೆಲ್ಲ ಕರಗಿ
ಮಳೆಹನಿಯಾಗಿ
ಭೂಮಿಗೆ ಬಿತ್ತು..
~~~~~~~~~~~~~~~~~~
ನಿರ್ಧಾರ
ಬೇಸಿಗೆಯ
ಬರಗಾಲದಿ
ಜನ ನೀರಿಗಾಗಿ
ಪರದಾಡುತ್ತಿರುವಾಗ
ಬೇಸತ್ತು
ಮೇಲಿಂದ ಹಾರಿ
ಸಾಯೋಣವೆಂದು
ನಿರ್ಧರಿಸಿದವು
ಆಗಸದ ಕಾರ್ಮೋಡಗಳು..
~~~~~~~~~~~~~~~~
ತುಂತುರು
ಮೋಡದ
ಗೂಡೊಳಗೆ
ಕುಳಿತ ಪುಟ್ಟ
ನೀರು ಹಕ್ಕಿಯ
ಮರಿಗಳು
ಭಾರ ತಾಳದೆ
ಹಾರಲಾಗದೆ
ಭುವಿಗುರುಳಿದವು
~~~~~~~~~~~~~~~~~
ಮಳೆ ಬಂದಾಗ
ಭಾವದ ಬಿಂದಿಗೆ
ತುಂಬಿ ಹೋಯಿತು
ನೆನಪಿನ ಬುತ್ತಿ
ಬಿಚ್ಚಿಕೊಂಡಿತು
~~~~~~~~~~~~~~~~~
ಮಳೆ
ಭುವಿಯಿಂದ ಆವಿಯಾಗಿ
ಗಗನವನ್ನು ವರಿಸಲು
ಹೋಗಿದ್ದ ನೀರು
ನಿರಾಸೆಯಾಗಿ
ತಿರುಗಿ
ತವರಿಗೆ ಬಂತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ